ಇಬ್ಬರು ಮಕ್ಕಳನ್ನು ನದಿಗೆ ದೂಡಿ, ತಾನೂ ಪ್ರಾಣ ಕಳೆದುಕೊಂಡ ವಕೀಲೆ
ಕೊಟ್ಟಾಯಂ : ತಾಯಿಯೊಬ್ಬಳು ತನ್ನ ಎರಡು ಮಕ್ಕಳನ್ನು ನದಿಗೆ ದೂಡಿ, ಆ ಬಳಿಕ ತಾನೂ ಹಾರಿ ಪ್ರಾಣ ಕಳೆದುಕೊಂಡಿರುವ ಘಟನೆ ಕೇರಳದ ಕೊಟ್ಟಾಯಂನಲ್ಲಿ ಮಂಗಳವಾರ(ಏ.15) ರಂದು ನಡೆದಿರುವುದು ವರದಿಯಾಗಿದೆ. WhatsApp Group Join Now ಕೊಟ್ಟಾಯಂನ ಎಟ್ಟುಮನೂರಿನ ನೀರಿಕ್ಕಾಡ್ನ ತೊಣ್ಣಮ್ಮವುಂಗಲ್ ಮೂಲದವರಾದ ವಕೀಲೆ ಜಿಸ್ಕೋಲ್ (35) ತಮ್ಮ ಪುತ್ರಿಯರಾದ ಪೊನ್ನು (2) ಮತ್ತು ನೇಹಾ (5) ಅವರೊಂದಿಗೆ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಮಂಗಳವಾರ ಮಧ್ಯಾಹ್ನ ನದಿಯಲ್ಲಿ ಮಕ್ಕಳು ತೇಲುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಕೂಡಲೇ ರಕ್ಷಣೆಗೆ ಧಾವಿಸಿದ್ದಾರೆ. … Read more